Wednesday, October 8, 2008

ಎಲ್ಲಿ ಹೋಯಿತು ವಿಶ್ವಮಾನವತವಾದ

ಎಲ್ಲೆಂದರಲ್ಲಿ ಬಾಂಬು ಸ್ಫೋಟ
ಅಮಾಯಕರ ನೋವು, ಕಿರುಚಾಟ
ಸಾಲು, ಸಾಲು ಶವಗಳ ಯಾತ್ರೆ
ಎಲ್ಲಿ ಹೋಯಿತು ಬುದ್ಧನ ಅಹಿಂಸೆ

ಜಾತಿ-ಧರ್ಮ-ಜೆಹಾದ್ ಹೆಸರಲ್ಲಿ
ನಡೆದಿದೆ ಮುಗ್ದ ಜನರ ಮಾರಣಹೋಮ
ದಗದಹಿಸುತ್ತಿದೆ ದ್ವೇಷದ ಅಗ್ನಿಕುಂಡು
ಎಲ್ಲಿ ಹೋಯಿತು ಗಾಂಧಿಯ ಶಾಂತಿಮಂತ್ರ

ಮತ-ಮತಾಂತರಗಳ ಕಿತ್ತಾಟ
ಮಸೀದಿ, ಮಂದಿರ, ಚರ್ಚ್ ಧ್ವಂಸ
ನಲುಗಿದೆ ಹೋಗಿದೆ ಕೋಮುಸೌಹಾರ್ದ
ಎಲ್ಲಿ ಹೋಯಿತು ವಿಶ್ವಮಾನವತವಾದ

ಬಾಂಬು, ತ್ರಿಶೂಲಗಳ ಅಟ್ಟಹಾಸ
ಹರಡಿದೆ ಎಲ್ಲೆಡೆ ಕೋಮುದ್ವೇಷ
ಮರೆಯಾಗಿದೆ ಬುದ್ಧ-ಗಾಂಧಿ ಸಂದೇಶ
ಎಲ್ಲಿ ಹೋಯಿತು ಪ್ರೀತಿ-ವಿಶ್ವಾಸ

No comments: