Thursday, May 8, 2008

ಚಂದಮಾಮನಿಗೆ ಅರವತ್ತು......

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲ ಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರಿ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ..
ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳು ತ್ತದೆ. ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ.
ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂ ಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದ ಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ.
ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು.
1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾ ಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು.
ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕ ಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು, ಪ್ರಥಮವಾಗಿ ಚಂದಮಾಮ ಚೆ ನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್, ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಥಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು.
1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು. 2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ. 1981ರಲ್ಲಿ ಅಂಧರಿ ಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿ ಕ್ಸ್‌‌ನದ್ದು.
ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾಧ ವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆ ಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......

Sunday, May 4, 2008

ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!

ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಮತದಾರರಿಗೆ ಭರವಸೆಗಳ ಸುಗ್ಗಿ ಕಾಲ...ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ಹಂಬಲ ಚುನಾವಣಾ ಅಖಾಡದಲ್ಲಿರುವವರದ್ದಾದರೆ, ರಾಜ್ಯದ ಸೂತ್ರವನ್ನು ಹಿಡಿಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ.

ಭರ್ಜರಿ ಪ್ರಚಾರದೊಂದಿಗೆ ಮತದಾರರ 'ಬೇಟೆಗೆ' ಇಳಿದಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲಿಗೆ ರೈತರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ, ಪ್ರತಿ ಹಸಿರು ಕಾರ್ಡ್ ಹೊಂದಿರುವವರಿಗೆ 2ರೂ.ಗೆ ಅಕ್ಕಿ, ಕಲರ್ ಟಿವಿ, ಹಸಿರು ಕಾರ್ಡ್‌‌ದಾರರಿಗೆ ಯಶಸ್ವಿನಿ ಯೋಜನೆ ವಿಸ್ತರಣೆ, ನಿರುದ್ಯೋಗಿಗಳಿಗೆ 2ವರ್ಷ ತರಬೇತಿ, ಮಾಸಿಕ ಭತ್ಯೆ ಸೇರಿದಂತೆ ಇನ್ನಿತರ ಭರವಸೆ ನೀಡಿದೆ.

ಕೇಂದ್ರ ಸರಕಾರ ಕೂಡ ಈ ಬಾರಿ ಬಜೆಟ್‌‌ನಲ್ಲಿ ರೈತರ 60ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಘೋ ಷಿಸಿದೆ. ಇವೇ ಅಸ್ತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್, ರಾಜ್ಯದಲ್ಲಿಯೂ ರೈತರನ್ನ ಗಮನದಲ್ಲಿಟ್ಟು ಕೊಂಡು, ಅಕ್ಕಿ. ಟಿವಿಗಳ ಆಮಿಷದ ಮೂಲಕ ಮತದಾರರನ್ನು ಸೆಳೆಯಲು ಹೊರಟಿದೆ. ಆ ಕಾರಣಕ್ಕಾಗಿಯೇ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯರಾಜಕಾರಣದಲ್ಲಿ ಪಾಂಚಜನ್ಯ
ಮೊಳಗಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾ ಗಿದ್ದರಿಂದ, ದೇವೇಗೌಡರಿಗೆ ಎದುರಾಳಿಯಾಗಿ ಕೃಷ್ಣರನ್ನು ಅಖಾಡಕ್ಕೆ ಇಳಿಸಲಾಗಿದೆ. ಎಸ್.ಎಂ.ಅವರು ತಮ್ಮ ಅಧಿಕಾರಾವಧಿಯಲ್ಲಿ ಹೈಟೆಕ್ ಮಂತ್ರ ಜಪಿಸುತ್ತಿದ್ದರು. ಈಗ ಅಕ್ಕಿ, ಅನ್ನ ದಾಸೋಹ, ರೈತರ ಪರ ಮುಖವಾಡದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.

ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ ನುಸಿ ರೋಗ ನಿವಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿತ್ತು.

ನುಸಿರೋಗದಿಂದ ತತ್ತರಿಸಿದ ರೈತರು ''ನೀರಾ'' ತೆಗೆಯಲು ಮುಂದಾದವರ ಮೇಲೆ ಗೋಲಿಬಾರ್ ನಡೆಸಿದ್ದು ಕೃಷ್ಣ ನೇತೃತ್ವದ ಸರಕಾರ. ಈಗ ಅಧಿಕಾರದ ಗದ್ದುಗೆಗಾಗಿ ರೈತರನ್ನ ಮುಂದಿಟ್ಟುಕೊಂಡು ಮತಯಾಚನೆಗೆ ಹೊರಟಿದ್ದಾರೆ.ಆಶ್ವಾಸನೆಗಳು ಕೊಡಲು ಹಣ ಕೊಡಬೇಕೆಂದಿಲ್ಲ, ಮತ್ತು ಆಶ್ವಾಸನೆ ನೀಡುವುದು ಅಪರಾಧವೂ ಅಲ್ಲ!!

ಕಳೆದ ಚುನಾವಣೆಯಲ್ಲೂ ಧರಂಸಿಂಗ್ ಅಧಿಕಾರಕ್ಕೆ ಏರುವ ಮುನ್ನು ನಿರುದ್ಯೋಗಿಗಳಿಗೆ ಭತ್ಯೆಯ ಆಶ್ವಾಸನೆ ನೀಡಿತ್ತು. ಬಳಿಕ ಮೈತ್ರಿ ಸರಕಾರ ರಚನೆಗೊಂಡಾಗ ಅದರ ಮಾತೇ ಇಲ್ಲ, ಆಗ ನಮ್ಮನ್ನು ನೀವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿಲ್ಲದ ಕಾರಣ ಆಶ್ವಾಸನೆ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಧರಂ ಗರಂ ಆಗಿ ಹೇಳಿದ್ದರು.ಅಷ್ಟಕ್ಕೂ ಟಿವಿ, 2 ರೂ.ಅಕ್ಕಿ, ಸಾಲ ಮನ್ನಾ ಅಂತ ಸಾಲು, ಸಾಲು ಪಟ್ಟಿ ನೀಡುತ್ತಾರೆ, ಹಾಗಂತ ಅವರ ಆಸ್ತಿಯ ಹಣ ಸುರಿದು ಸಾಲ ಮನ್ನಾ, ಟಿವಿ ಖರೀದಿ ಮಾಡುವುದಿಲ್ಲ, ಅವೆಲ್ಲವೂ ಮತ್ತೆ ಸರಕಾರ ಬೊಕ್ಕಸಕ್ಕೆ ಖೋತಾ!!.

ಅಧಿಕಾರದ ಗದ್ದುಗೆ ಏರುವ ಮುನ್ನಾ ನೂರೆಂಟು ಆಶ್ವಾಸನೆ ಕೊಟ್ಟು, ಬಳಿಕ ಅಧಿಕಾರಕ್ಕೆ ಏರಿ ಆಶ್ವಾಸನೆ ಈಡೇರಿಸಿದರೂ ಅದು ಜನಸಾಮಾನ್ಯರಿಗೆ ಹೊರೆಯಾಗುತ್ತ ಹೋಗುತ್ತದೆ. ಕಳೆದ 50ವರ್ಷಗಳಿಂದ ಕಾಂಗ್ರೆ ಸ್ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಕೇವಲ 20 ತಿಂಗಳ ಅಧಿಕಾರದ ಅವಧಿ ಯಲ್ಲೇ ಕಾಂಗ್ರೆಸ್ ಅನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಈ ಬಾರಿ ಚುನಾವಣೆಯಲ್ಲಿ ಅದರ ನಿಲುವು ಗಮನಿಸಿದರೆ ತಿಳಿಯುತ್ತದೆ. ಲ್ಯಾಂಡ್ ಮಾಫಿಯಾ, ಗಣಿ ದೊರೆಗಳಿಗೆ ಮಣೆ ಹಾಕುವ ಮೂಲಕ ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಲು ಹೊರಟಿದ್ದಾರೆ.

ಹಾಗಾದರೆ ಇವರಿಗೆಲ್ಲಾ ಜನಸೇವೆಯ ಮೇಲೆ ಅಷ್ಟೊಂದು ಕಾಳಜಿಯಾ ಅಥವಾ ಅವರ ಸ್ವ ರಕ್ಷಣೆಗಾಗಿ ಅಧಿಕಾರದ ಬೆನ್ನತ್ತಿ ಹೊರಟಿದ್ದಾರೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.ಅಪ್ಪ-ಮಕ್ಕಳ ಪಕ್ಷ ಕಳ್ಳರದ್ದು, ಭೂ ಕಬಳಿಕೆ ಮಾಡುತ್ತಾರೆ ಎಂದೆಲ್ಲಾ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಭ್ರಷ್ಟರಿಗೆ, ಕ್ರಿಮಿನಲ್, ಭೂ ಕಳ್ಳರಿಗೆ ರೆಡ್ ಕಾರ್ಪೆಟ್ ಹಾಸಿ ಪಕ್ಷದಲ್ಲಿ ಸೀಟು ಕೊಟ್ಟಿದ್ದಾರೆ.

ಅಷ್ಟೇ ಅಲ್ಲಾ ಬಿಜೆಪಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಂತೆ ರೈತರಿಗೆ ಉಚಿತ ವಿದ್ಯುತ್, ಕಲರ್ ಟಿವಿ, ಬಡವರಿಗೆ 2ರೂ.ಅಕ್ಕಿ, ಆಶ್ರಯ, ಇಂದಿರಾ ಅವಾಜ್ ಗೃಹ ಸಾಲಮನ್ನಾ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಯಾವ ಪಕ್ಷದಲ್ಲೂ ಸಿದ್ದಾಂತ, ನೈತಿಕತೆ ಉಳಿದಿಲ್ಲ, ಭರವಸೆಗಳ ಮೂಟೆಯೊಂದಿಗೆ ಮತದಾರರ ಮುಂದೆ ಕೈಮುಗಿಯುವ ಜನಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರಿದ ಮೇಲೆ ''ಕೈ'' ಕೊಡುವ ಚಾಳಿಯನ್ನು ಮತದಾರರ ನೋಡಿ,ನೋಡಿ ಸುಸ್ತಾಗಿದ್ದಾನೆ.

ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ, ನಗದು, ಸೀರೆ, ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್, ದೇವೇಗೌಡರ ಕಾರು, ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ.

ಆದರೆ ಈ ಬಾರಿ ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಅಕ್ರಮಗಳಿಗೆ ಕಡಿವಾಣ ಹಾಕುವುದು ತುಸು ಕಠಿಣವೇ ಆಗಬಹುದಾದ ಲಕ್ಷಣ ಗೋಚರಿಸತೊಡಗಿದೆ.ವೈಯಕ್ತಿಕ ಪ್ರತಿಷ್ಠೆ, ಅಸಮಾ ಧಾನ, ಪಿತೂರಿ, ಸ್ವಾರ್ಥಗಳ ಸರಮಾಲೆ ಮೂಲಕ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಪಿ, ಬಿಎಸ್ಪಿ, ಸಿಪಿಐಎಂ ಅಖಾಡ ಇಳಿದಿದ್ದರೆ, ತ್ರಿಶಂಕು ಸ್ಥಿತಿಯಲ್ಲಿರುವ ಮತದಾರನಿಗೆ ಸುಭಗರನ್ನು ಗುರುತಿಸಿ ಆರಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ..........