Monday, April 28, 2008

ಸಂಜೀವ್ ಗಾಂಧಿ ಯಾರು ?!

ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್‌‌ಕರ್ ದೇಶಪ್ರೇಮ ಹೀಗೆ....

ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ನೆಹರೂ ಕುರಿತು, ಇಂದಿರಾ ಬಗ್ಗೆ ಈಗಾಗಲೇ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ, ಇತ್ತೀಚೆಗೆ ನನ್ನ ಎದುರಿಗೆ ಧುತ್ತನೇ ಸಂಜಯ್ ಗಾಂಧಿ ಬಗ್ಗೆ ಪ್ರಶ್ನೆ ಎಸೆದಾಕೆ ರಶ್ಮಿ ಪೈ, ಆಕೆ ಗಾಂಧಿ ಕುಟುಂಬದ ತಲೆಮಾರಿನ ಹೆಸರನ್ನು ನೋಡುತ್ತಿದ್ದಾಗ, ಅಲ್ಲಿ ಸಂಜಯ್ ಗಾಂಧಿ ಮುಂದೆ ಮೊಹಮ್ಮದ್ ಯೂನುಸ್ ಅಂತ ದಾಖಲಿಸಲಾಗಿತ್ತು. ಸಂಜಯ್‌‌‌ಗೂ - ಯೂನುಸ್‌‌ಗೂ ಏನು ಸಂಬಂಧ, ಇದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂಬಂತೆ, ಇದರ ಹಿಂದಿನ ರಹಸ್ಯ ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.

ಆದರೂ ಆ ಹೆಸರಿನ ಹಿಂದಿನ ಇರುವ ರಹಸ್ಯವಾದರು ಏನು, ಹಾಗಾದರೆ ಯಾವ ಸಂಬಂಧ....ಎಂಬುದಕ್ಕಿಂತ ಸ್ವಲ್ಪ ವಿವರವಾಗಿ ನೆಹರು ವಂಶದ ಬಗ್ಗೆ ರಾವ್ ಅವರು ದಾಖಲಿಸಿದ ವಿವರಗಳನ್ನು ಓದುತ್ತಾ ಹೋದರೆ ನಿಮಗೆ ತಿಳಿಯುತ್ತೆ...ಇಂದಿಗೂ ಸಂಜಯ್ ಗಾಂಧಿಯನ್ನು ತಾಯಿ ಇಂದಿರಾಳೇ ಕೊಲೆ ಮಾಡಿಸಿದ್ದಾರೆ, ಆತನ ಬಳಿ ಇದ್ದ ರಿಸ್ಟ್ ವಾಚ್ ಏನಾಯಿತು ಎಂಬಂತಹ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿರುವಂತೆ ಇವತ್ತಿಗೂ ಅಂತಹ 'ಚಿದಂಬರ ರಹಸ್ಯ'ದೆಡೆಗೊಂದು ಕುತೂಹಲ ಎಲ್ಲರಲ್ಲಿಯೂ ಇದೆ.ಕೆ.ಎನ್.ರಾವ್ ಅವರು ಬರೆದ ' ನೆಹರು ವಂಶ ' ಪುಸ್ತಕದಲ್ಲಿ ಅವರೇ ಬರೆದಿರುವಂತೆ, ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಇಂದಿರಾ ಪ್ರಿಯದರ್ಶಿನಿ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಕಮಲ ನೆಹರು ಇಂದಿರಾ ತಾಯಿ, ಆಕೆ ತೀರಿಕೊಂಡಿದ್ದು ಸ್ವಿಡ್ಜ್‌‌ರ್‌‌ಲ್ಯಾಂಡ್‌‌ನಲ್ಲಿ. ನೆಹರು ಪ್ರೀತಿಯ ಮಗಳು ಇಂದಿರಾಳ ಮದುವೆ ಗೆ ಮಾತ್ರ ಕಮಲ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು,ಯಾಕೆ ಫಿರೋಜ್ ಜತೆಗಿನ ಮದುವೆಗೆ ವಿರೋಧ ವ್ಯಕ್ತಪಡಿ ಸಲಾ ಯಿತು, ಫಿರೋಜ್ ಯಾರು? ಆತ ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ವೈನ್ ಸಪ್ಲೈಯ್‌‌ರ್ ಮಗನಾಗಿದ್ದ ಹೀಗೆ ನಾನಾ ರೀತಿಯಲ್ಲಿ ಫಿರೋಜ್‌‌ನನ್ನು ಗುರುತಿಸಲಾಗಿತ್ತು. ರಾಜೀವ್ ಅಜ್ಜನ ಹೆಸರು ಪಂಡಿತ್ ಜವಾಹರಲಾಲ್ ನೆಹರು, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಅಜ್ಜಂದಿರು ಇರುತ್ತಾರೆ, ಒಂದು ತಂದೆಯ ತಂದೆ, ಇನ್ನೊಂದು ತಾಯಿಯ ತಂದೆ.

ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ. ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ. ಎನ್. ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ. ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ(ತಂದೆಯ ತಂದೆ) ಮುಸ್ಲಿಂ, ಆತ ಗುಜರಾತ್ ಜುನಾಗಢ್ ಪ್ರದೇಶದ 'ಜಂಟಲ್‌‌ಮೆನ್" ಆಗಿದ್ದರು.ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು.

ಹೀಗೆ ಸಾಗುವ ನೆಹರು ವಂಶ ಪುರಾಣ ಕಥನ, ರಾಜೀವ್ ತಂದೆ ಫಿರೋಜ್, ಇಂದಿರಾ ಗಾಂಧಿಯನ್ನು ಮದುವೆಯಾಗುವ ಮುನ್ನ ಫಿರೋಜ್ ಖಾನ್ ಆಗಿದ್ದರು. ಫಿರೋಜ್ ತಾಯಿ ಕುಟುಂಬದ ಹೆಸರು ಗಾಂಡಿ, ಈ ಹೆಸರನ್ನು ಇಂದಿರಾ ಮದುವೆ ಬಳಿಕ ಗಾಂಧಿ ಎಂದು ಬದಲಾಯಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ!!.ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದವರು ಫಿರೋಜ್ ಖಾನ್, ಬಳಿಕ ಆಕೆಯನ್ನು ಲಂಡನ್‌‌ನ ಮಸೀದಿಯಲ್ಲಿ ವಿವಾಹವಾಗಿದ್ದರು.

ಇದು ನೆಹರುಗೆ ನುಂಗಲಾರದ ತುಪ್ಪವಾಗಿತ್ತು.ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂ ದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಲಾಗಿತ್ತು. (ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು).

ಇಂತಹ ಸಂಗತಿಗಳನ್ನೇ ನೆಹರು ರಹಸ್ಯವಾಗಿಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದರು, ಅದರಂತೆಯೇ ಫಿರೋಜ್-ಇಂದಿರಾ ಪುತ್ರರಾದ ರಾಜೀವ್, ಸಂಜಯ್ ಬಗೆಗೂ ಅನುಮಾನದ ಹುತ್ತಗಳು ಸುತ್ತುತ್ತಲೇ ಇವೆ.ಇಂದಿರೆಯ ಆಡಳಿತ ಅವಧಿಯಲ್ಲಿ ಸಂಜಯ್ ರಾಜಕೀಯ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಕಾರು ಕದ್ದು ಸಿಕ್ಕಿ ಬಿದ್ದ ಸಂಜಯ್‌‌ನನ್ನು ರಕ್ಷಿಸಲು ಇಂದಿರಾ ಮತ್ತು ಸಹೋದ್ಯೋಗಿಗಳು ಇನ್ನಿಲ್ಲದಂತೆ ಶ್ರಮಿಸಿದ್ದರು.ಸಂಜಯ್ ಗಾಂಧಿ ನಿಜವಾದ ಹೆಸರು ಸಂಜೀವ್ ಗಾಂಧಿ, ಈತ ಯುಕೆಯಲ್ಲಿ ಕಾರು ಕದ್ದು ಸಿಕ್ಕಿ ಬಿದ್ದಿದ್ದು, ಅಲ್ಲಿ ಆತನ ಪಾಸ್‌‌ಫೋರ್ಟ್ ಅನ್ನು ವಶಪಡಿಸಿಕೊಂಡಿದ್ದರು.

ನಂತರ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ನೆಹರು ಆಪ್ತಮಿತ್ರ ಕೃಷ್ಣಮೆನನ್ ಅವರು ಸಂಜಯ್ ಎಂಬ ಹೆಸರಲ್ಲಿ ಹೊಸ ಪಾಸ್‌‌ಫೋರ್ಟ್ ಮಾಡಿಕೊಟ್ಟಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ಇಂದಿರಾಗಾಂಧಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೇ ಪರೋಕ್ಷವಾಗಿ ಸರಕಾರವನ್ನೇ ಹಿಡಿತಲ್ಲಿ ಇಟ್ಟುಕೊಂಡಿದ್ದ, ಆತ ರಾಷ್ಟ್ರವನ್ನು ತನ್ನ ಸ್ವಂತದ ಆಸ್ತಿ ಎಂಬಂತೆ ವರ್ತಿಸುತ್ತಿದ್ದ. ಅಷ್ಟಾಗಿಯೂ ಇಂದಿರೆ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಗಾಂಧಾರಿಯಂತೆ ಕಣ್ಣಿದ್ದು ಕುರುಡರಾಗಿದ್ದರು.ಇದಕ್ಕೆಲ್ಲಾ ಅಸ್ತ್ರ ಎಂಬಂತೆ ಸಂಜಯ್ ತಾಯಿ ಇಂದಿರೆಯನ್ನು ಅಂಗೈಯಲ್ಲಿಟ್ಟ ಬುಗುರಿಯಂತೆ ತಿರುಗುಸುತ್ತಿದ್ದ, ಮತ್ತೆ ಪದೇ, ಪದೇ ಅದೇ ಮಾತನ್ನು ಕೇಳುತ್ತಿದ್ದ ಹೇಳು ನನ್ನ ನಿಜವಾದ ಅಪ್ಪ ಯಾರು ಅಂತ ??

ಇಂದಿರಾ ಪತಿ ಫಿರೋಜ್ ಖಾನ್‌‌ ಅವರನ್ನು ಪ್ರಧಾನಿ ನಿವಾಸ ತೀನ್‌‌‌ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು. 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.ಸಂಜಯ್ ಗಾಂಧಿ ಫಿರೋಜ್ ಗಾಂಧಿ ಮಗನಲ್ಲ ಆತ ಮತ್ತೊಬ್ಬ ಮುಸ್ಲಿಂ ಜಂಟಲ್ ಮೆನ್ ಆಗಿದ್ದ ಮೊಹಮ್ಮದ್ ಯೂನಿಸ್ ಪುತ್ರ ಎಂಬ ವಾಸ್ತವ ಸಂಗತಿ ಸಂಜಯ್ ತಿಳಿದುಹೋಗಿತ್ತು.

ಅಲ್ಲದೇ ಯೂನಿಸ್‌‌ಗೆ ಸಂಜಯ್ ಸಿಖ್ ಯುವತಿ ಮೇನಕಳಾನ್ನು ಮದುವೆಯಾಗುವುದು ಇಷ್ಟ ಇಲ್ಲವಾಗಿತ್ತು. ಅಷ್ಟರಲ್ಲಾಗಲೇ ಸಂಜಯ್ ಕರ್ನಲ್ ಆನಂದ್ ಎಂಬವರ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ, ಆಕೆಯನ್ನೇ ಮದುವೆಯಾಗ ಬೇಕು ಎಂದು ಕರ್ನಲ್ ಸಂಜಯ್‌ಗೆ ಬೆದರಿಕೆ ಕೂಡ ಒಡ್ಡಿದ್ದರು. ಆದರೆ ಸಂಜಯ್ ಮೇನಕಳನ್ನು ವರಿಸಿಬಿಟ್ಟಿದ್ದ.

ಸಂಜಯ್ ಮುಸ್ಲಿಂ ಯುವತಿಯನ್ನೇ ಮದುವೆಯಾಗಬೇಕು ಎಂದು ಹಂಬಲಿಸಿದ್ದರು. ಸಂಜಯ್ ವಿಮಾನ ಅಪಘಾತದಲ್ಲಿ ತೀರಿ ಕೊಂಡಾಗ ಯೂನುಸ್ ವೇದನೆಗೊಳಗಾಗಿರುವುದಾಗಿ ಯೂನುಸ್ ತಮ್ಮ ವ್ಯಕ್ತಿ,ಮೋಹ ಮತ್ತು ರಾಜಕೀಯ ಎಂಬ ಪುಸ್ತಕದಲ್ಲಿ ದಾಖಲಿಸಿರುವುದಾಗಿ ನೆಹರು ಅವರ ದೀರ್ಘಕಾಲದ ಖಾಸಗಿ ಕಾರ್ಯದರ್ಶಿಯಾಗಿದ್ದ ಎಂ.ಒ.ಮಥಾಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಹೀಗೆ ನೆಹರು ಕಾಲದ ನೆನಪು (ರಿಮಿನಿಸೆಸ್ಸ್ ಆಫ್ ದಿ ನೆಹರು ಏಜ್ ) ಎಂಬ ಪುಸ್ತಕದಲ್ಲಿ ಎಸ್.ಒ.ಮಥಾಯ್ ಅವರು ಇಂತಹ ಹಲವಾರ ರಹಸ್ಯಗಳನ್ನು ಹೊರಗೆಡಹಿದ್ದರು. ಆದರೆ ಭಾರತ ಸರಕಾರ ಆ ಪುಸ್ತಕವನ್ನು ನಿಷೇಧಿಸಿತ್ತು!!.

No comments: